80 likes | 85 Views
Indic academy initiative for publishing content on Shastraas, Indic Knowledge Systems & Indology and to showcase the activities of Indic Academy.<br>Visit us:<br>https://www.indica.today/<br>
E N D
Indic academy initiative for publishing content on Shastraas, Indic Knowledge Systems & Indology and to showcase the activities of Indic Academy.Visit us:https://www.indica.today/
We publish Quick Reads (articles of less than 1500 words), Long Reads (articles with word counts between 1500 and 4000), Research Papers (more than 8000 words) and Book Reviews. We currently publish in English, Hindi, Kannada, Telugu and Sanskrit.
ವೇದ, ವೇದಾಂಗ ಸಹಿತ ಸಾಂಖ್ಯ (ವೇದಾಂತ), ಪುರಾಣ ಅಥವಾ ಶ್ರೇಷ್ಠ ಕುಲದಲ್ಲಿ ಜನ್ಮ – ನಡತೆಗೆಟ್ಟರೆ, ಇವ್ಯಾವುದೂ – ಒಬ್ಬ ವ್ಯಕ್ತಿಯು ನರೋತ್ತಮನಾದರೂ ಕೂಡ , ಆತನನ್ನು ಅಧೋಗತಿಯಿಂದ ಪಾರು ಮಾಡಲಾಗದು ಎಂದು ಕಶ್ಯಪರು ಹೇಳಿದ ಉಲ್ಲೇಖ ಮಹಾಭಾರತದಲ್ಲಿ ಕಂಡುಬರುತ್ತದೆ.
ಬಹುಶಃ ನನ್ನ ಪತ್ರಿಯೊಂದು ಪ್ರಬಂಧದಲ್ಲಿ ಮಹಾಭಾರತದ ಉಲ್ಲೇಖ ಇದ್ದೇಯಿದೆ. ಏನಿಲ್ಲವಾದರೂ, ಈ ವ್ಯಾಸಸೃಷ್ಟಿಯ ಆಲೋಚನೆ ಕಡೆಯ ಪಕ್ಷ ಒಂದು ಸಾಲಿನಲ್ಲಾದರೂ ಮೂಡಿಯೇಯಿರುತ್ತದೆ. ಒಮ್ಮೊಮ್ಮೆ ತೀರ ಅತಿರೇಕವೆನಿಸುವಷ್ಟು. ಏನು ಇದೊಂದು ಬಿಟ್ಟರೆ ಬೇರೇನು ವಿಷಯವೇ ಇಲ್ಲವೇ ಇವನಿಗೆ ? ಏನೋ ತಾನೇ ಬರೆದಿರುವ ಹಾಗೆ ಅದೇ ರಾಗವನ್ನು ಎತ್ತುತ್ತಾನಲ್ಲ ಎಂದು ಕೆಲವರಿಗೆ ಅನಿಸಬಹುದು. ಇಷ್ಟಕ್ಕೂ ಮಹಾಭಾರತವನ್ನು ಸ್ಮರಣೆಯಲ್ಲಿ ಧರಿಸಿ ಚಕ್ರವರ್ತಿಯಂತೆ ಏನು ಕೇಳಿದರೂ ಉತ್ತರಿಸಬಹುದಾದಂಥ ಮೇಧಾವಿಯೇ ನಾನು ? ಖಂಡಿತ ಅಲ್ಲ !
ಆದರೂ ವ್ಯಾಸರ ಕೃತಿಯ ಬಗ್ಗೆ ಒಂದು ಬಗೆಯ ಗೀಳು ನನಗೆ. ಹೇಗೆ ಕೆಲವರು ಮಾತೆತ್ತಿದರೆ ಸಿನಿಮಾ ಅಥವಾ pop culture ವಿಚಾರಗಳಿಗೆ ಶುರು ಹಚ್ಚಿಬಿಡುತ್ತಾರೋ ಹಾಗೆಯೇ ಇದು. ಅವರಿಗಿಂತ ನಾನು ಹೆಚ್ಚೇನು ವಿಭಿನ್ನನಲ್ಲ. ಆದರೆ ಮಹಾಭಾರತದ ವೈಶಿಷ್ಟ್ಯಯವೇ ಅಂಥದ್ದು. ಅತಿಶಯವೆಂದರೆ, ಎಂತಹ ಭೂಪನೂ ಒಮ್ಮೆ ಮಹಾಭಾರತವನ್ನು ಓದಿ, ಅಲ್ಪ-ಸ್ವಲ್ಪ ತಿಳಿದುಕೊಂಡು ಅದರ ವ್ಯಾಖ್ಯಾನ ಮಾಡಿದರೆ ಸಾಕು. ಕೇಳುಗರಲ್ಲಿ ಈತ ಯಾವ ಮಹಾನುಭಾವನೊ ಅಥವಾ ಘನ ವಿದ್ವಾಂಸನೋ ಎಂಬ ಸಂಶಯ ಮೂಡಬೇಕು. ಅಷ್ಟು ಪ್ರಬಲ ಮತ್ತು ಪವಿತ್ರ ಶಕ್ತಿ ಮಹಾಭಾರತ ಗ್ರಂಥಕ್ಕಿದೆ.
https://www.indica.today/ To Read more about blogs like this visit us: